Thursday, January 30, 2014

ಬಯಕೆ

ಬದೂವಿನ ಸೂತ್ತಲು  ಬೆಳೆದ ಬತ್ತ ,ಕಾಲು ದಾರಿಯನ್ನು ಅವಚಿಕೊಂಡು ದಟ್ಟವಾಗಿ ಒತ್ತಿಕೊಂಡಿತ್ತು.ಆಕೆ ಅದೇ ಉತ್ಸಾಹದಲ್ಲಿ
ಓಡುತಿದ್ದಳು.
  ನೀಲ್ಲು, ನೀಲ್ಲು '      ನಾನು ಕೂಗತ್ತಲೆ ಇದ್ದೆ.
  ಯಾ ಹೋ   '    ಆಕೆಯದು ದಣಿಯದ  ದನಿ.


ಒಂಟಿ ಮಾವಿನ ಮರ  ಒಂದೆ ಒಂದು  ಕಾಯಿ ಟೊಂಗೆಯ ತುದಿಯಲಿ.

ಕಲ್ಲು ಎಸೆದು, ಎಸೆದು, ಆಕೆ ಸುಸ್ತು.

ಆಕೆಯ ಹಿಂದೆ ಓಡಿದ ದಣಿವು,ಉಸಿರು, ನನಗೆ

ನನಗೆ ಆ   ಮಾವಿನ ಕಾಯಿ ಬೇಕು.ಆಕೆಯ ಆದೇಶ.

ಬೀಸಿದ ಕಲ್ಲು ಗುರಿ ತಲುಪಲಿಲ್ಲ.

ಮರ ಹತ್ತು,

ಭಯ ಟೊಂಗೆ ಪೊಳ್ಳಾಗಿದೆ

ನನಗೆ ಗೊತ್ತಿಲ್ಲ ನನಗೆ ಮಾವಿನ ಕಾಯಿಬೇಕು

ಮರ ಎರತೊಡಗಿದೆ,ನಡಗುತ್ತ  ಜಾರುತಿರುವ ಕಾಲನ್ನು ಒತ್ತಿ ಹಿಡಿದೆ ಕೈ ನಡಗುತ್ತಿತ್ತು,ಮರದ ತುತ್ತ ತುದಿಯಲಿ ನಾನು.
ಹುಳಿ ಹುಳಿ ಕಾಯಿಗೆ ಕೈ ಹಾಕಿದೆ. ಕಾಯಿ ಸಿಕ್ಕಿತು.

ಕೆಳಗೆ ನೋಡಿದೆ

ಆಕೆ ಕಾಣುತ್ತಲೇ ಇಲ್ಲ.


ಸುಮ್ಮನೀರು

ಮುಗಿಲೆತ್ತರ ಚಾಚಿದ  ಆಲದ ಮರದ ಟೊಂಗಗಳೆಲ್ಲಾ ನೆಲಕ್ಕೆ ಇಳಿಬಿದ್ದು ರಸ್ತೆಯನೆಲ್ಲಾ ಆಕ್ರಮಿಸಿಕೊಂಡಿದ್ದವು.ಅವಳು ಬರುತ್ತಾಳೆಂಬ ನೀರಿಕ್ಷೆ ಕಾಡುತಿತ್ತು.ಒಂಟಿಯಾದ ಟಾರು ರಸ್ತೆ, ಅವಳ ಹೆಜ್ಜೆಯ ಸ್ಪರ್ಶಕ್ಕಾಗಿ ಅಂಗಾತ ಮಲಗಿಕೊಂಡಿತ್ತು.

 ತೆಳುವಾದ ಕೆಂಪು ಸ್ವೆಟರನ್ನು ಅವಚಿಕೊಂಡು ,ನೀಲಿಕೋಡೆಯನ್ನು ಗಾಳಿಯ ತೊಲಲಾಟದಲ್ಲಿ ಅಲಗಾಡಿಸುತ್ತ ಮೇತ್ತನೆ ಹೆಜ್ಜೆಯನ್ನು ಇಡುತ್ತ ಅವಳು ಬಂದಳು.

ಅವಳ ಎದುರಿಗೆ ಮುಗಿಲ ನೋಡುತ್ತ ನಿಂತೆ.
ಅವಳ ಕಣ್ಣಲ್ಲಿ ಆಶ್ಚರ್ಯ,ದುಗುಡ ,ಆತಂಕ

"ಅರಾಮ ಅದಿ'
'
ಹೆಂಗೋ ಅದಿನಿ'

ನೀನ್ಯಾಕೆ ಇಲ್ಲಿಗೆ ಬಂದಿ
       ಮಾತು ಬರಲಿಲ್ಲ ,ಕಣ್ಣು ತಂಪಾದವು.
'ಸ್ವಾರ್ಥಿಯಾಗಬೇಡ'
                 ಅವಳು ಮೌನವಾಗಿ ಮುಂದೆಹೊದಳು.
ಅವಳ ಕಂಕುಳಲ್ಲಿ ಕುಳಿತ ಮಗು ನನ್ನನ್ನೆ ದಿಟ್ಟಿಸುತಿತ್ತು.

ಹೋಗಿ ಎತ್ತಿಕೊಳ್ಳಲೇ ?

ಬೇಡ ನಾವೀಗ ಅಪರಿಚಿತರು.


Thursday, August 29, 2013

ಬೆಚ್ಚಗಿತ್ತು ಬಿಸಿಮಾತು ,ಅಚ್ಚದೆ ಉಳಿಯಲಿಲ್ಲ
ಕಪ್ಪಗಿತ್ತು ಬಿಳಿಮೊಡ  ಸುಮ್ಮನೆ ನಿಲ್ಲಲಿಲ್ಲ
ಕಣ್ಣು ತುಂಬಿತ್ತು ಹನಿ ಉದರಲಿಲ್ಲ
ಮಾತು ಉಕ್ಕುತ್ತಿತ್ತು ಮೌನ ಮುರಿಯಲಿಲ್ಲ


ಒಂಟಿಯಲ್ಲ ಆ ಹೆಮ್ಮರ ,ನಾನು ಅಪ್ಪಿಕೊಳ್ಳುವೆ
ಉದುರಿದ ಎಲೆಯ ನೆನಪಲ್ಲಿ ನೆಪವಾಗಿ
ನೆರಳ ಬಿಂಬದಲಿ ಆಕೃತಿಯಾಗಿ 
ನನ್ನದೆಯ ಉಸಿರು ತಾಗಿಸುತ್ತ ಅದರ ಉಸಿರು ಎಳೆಯುತ್ತ..............

Wednesday, August 28, 2013

ಮುನಿಯಬೇಡ ನೀನು
ಮುರಿದ ಮನಕೆ ಬೆಸುಗೆ ಬೇಡ
ಕತ್ತರಿಸಿದ ಕರುಳಿಗೆ ಕರುಣೆ ಬೇಡ
ಕಳೆದುಹೋದ ಕಾಲ ನೆನಪಿಸಬೇಡ
ದಿಕ್ಕರಿಸಿದ ದಾರಿಯಲಿ ನಡೆಯಬೇಡ
ಸೋಲಿಸಿದ ಆಟವನು ಆಡಬೇಡ
ಕಾಡಿಸಿದ ಕವಿತೆ ಹಾಡಬೇಡ


ನೀನ್ನ ಮೌನದಲಿ ಮಾತು ಅಡಗಿದೆ
ಸುಮ್ಮನಿದ್ದಷ್ಟು ಕಾಡಬೇಡ, ನೀ ದೂರ
ಹೋದಷ್ಟು ನೀನ್ನ ಮುಗ್ದತೆ ಸೆಳೆಯುತ್ತೆ

Tuesday, August 27, 2013

ಮತ್ತೆ ಸುರಿಯುವೆ

ಹಳ್ಳ ಊಕ್ಕಿ ,ಬತ್ತಿ,ಮತ್ತೆ ತಣ್ಣಗೆ ಹರಿಯುತ್ತಿದೆ
ಮರ ಹೂವಾಗಿ ,ಬರಡಾಗಿ ಮತ್ತೆ  ಚಿಗಿಯುತ್ತಿದೆ
ಮೊಡ ಸುರಿದು ಬಯಲಾಗಿ ಮತ್ತೆ ಉದುರುತ್ತಿದೆ
ಬಿಟ್ಟುಬಿಡು ಗೆಳೆಯ ನಾನೀಗ ಅವಳಲ್ಲ ,
ಹೊಸ ಟೊಂಗೆಯ ಮೇಲಿನ ಗೂಡು.
ನೀನ್ನಷ್ಟು ಗಡಸು ಇಲ್ಲದಿದ್ದರೂ ಪ್ರೀತಿ ಇದೆ
ಆ ಮರದ ನೆರಳಲ್ಲಿ ಹಳೆಯ ನೆನಪು ಮರೆತು
ಮತ್ತೆ ಕನಸು ಕಾಣುವೆ.

Monday, August 26, 2013

ಸಂಜೆ

ಸಂಜೀ ಅಂದ್ರ ಭಾಳ ಖುಷಿ ಅಕೈತಿ . ಆ ಸುರ್ಯ ತನ್ನ ಮನೆಗೆ ತಾ ಹೊಂಟ್ರ ನನ್ನ ಕಣ್ಣಾಗ ಕಾಯ್ದ ನಿರೀಕ್ಷೆ ಮುಗಿದ ಕ್ಷಣ ಈ ಸಂಜೆ.      ಗೋಧೊಳಿ ಕಾಲ, ಎತ್ತು ಎಮ್ಮಿ ಆಕಳ ಢರಕಿ ಹಾಕಿದ್ರ ಹಕ್ಯಾಗಿನ ಸಣ್ಣ ಕರುಗಳೆಲ್ಲಾ ಅವ್ವ ಅಪ್ಪನ ಕೂಡು ಆಸೆದಾಗ ಮನೆತುಂಬ ಚಿರಾಡಿ ಒಡೊಡಿ ಬರುವ ದನಗಳಿಗೆಲ್ಲಾ ಎದರಗೊಳ್ಳತಿದ್ದ ಕಾಲ.
ನಾನು ಅಷ್ಟ .ಸಂಜೀ ಮುಂದ ಬರೀ ಕಾತುರ ,ಹೊಲಕ್ಕ ಹೋದ ಅಪ್ಪ , ಸಂತಿಗಿ ಹೋದ ಅವ್ವ.ಯಾವಗ ಒಳ್ಳಿ ಬರತಾರು ಎನೇನ ತರತಾರು.  ಅಂತ ಕಾಯ್ದ ಸಂಜೆಗಳಿಗೆ ಲೆಕ್ಕಕಿಲ್ಲ.