Monday, August 26, 2013

ಸಂಜೆ

ಸಂಜೀ ಅಂದ್ರ ಭಾಳ ಖುಷಿ ಅಕೈತಿ . ಆ ಸುರ್ಯ ತನ್ನ ಮನೆಗೆ ತಾ ಹೊಂಟ್ರ ನನ್ನ ಕಣ್ಣಾಗ ಕಾಯ್ದ ನಿರೀಕ್ಷೆ ಮುಗಿದ ಕ್ಷಣ ಈ ಸಂಜೆ.      ಗೋಧೊಳಿ ಕಾಲ, ಎತ್ತು ಎಮ್ಮಿ ಆಕಳ ಢರಕಿ ಹಾಕಿದ್ರ ಹಕ್ಯಾಗಿನ ಸಣ್ಣ ಕರುಗಳೆಲ್ಲಾ ಅವ್ವ ಅಪ್ಪನ ಕೂಡು ಆಸೆದಾಗ ಮನೆತುಂಬ ಚಿರಾಡಿ ಒಡೊಡಿ ಬರುವ ದನಗಳಿಗೆಲ್ಲಾ ಎದರಗೊಳ್ಳತಿದ್ದ ಕಾಲ.
ನಾನು ಅಷ್ಟ .ಸಂಜೀ ಮುಂದ ಬರೀ ಕಾತುರ ,ಹೊಲಕ್ಕ ಹೋದ ಅಪ್ಪ , ಸಂತಿಗಿ ಹೋದ ಅವ್ವ.ಯಾವಗ ಒಳ್ಳಿ ಬರತಾರು ಎನೇನ ತರತಾರು.  ಅಂತ ಕಾಯ್ದ ಸಂಜೆಗಳಿಗೆ ಲೆಕ್ಕಕಿಲ್ಲ. 

No comments:

Post a Comment