Thursday, January 30, 2014

ಸುಮ್ಮನೀರು

ಮುಗಿಲೆತ್ತರ ಚಾಚಿದ  ಆಲದ ಮರದ ಟೊಂಗಗಳೆಲ್ಲಾ ನೆಲಕ್ಕೆ ಇಳಿಬಿದ್ದು ರಸ್ತೆಯನೆಲ್ಲಾ ಆಕ್ರಮಿಸಿಕೊಂಡಿದ್ದವು.ಅವಳು ಬರುತ್ತಾಳೆಂಬ ನೀರಿಕ್ಷೆ ಕಾಡುತಿತ್ತು.ಒಂಟಿಯಾದ ಟಾರು ರಸ್ತೆ, ಅವಳ ಹೆಜ್ಜೆಯ ಸ್ಪರ್ಶಕ್ಕಾಗಿ ಅಂಗಾತ ಮಲಗಿಕೊಂಡಿತ್ತು.

 ತೆಳುವಾದ ಕೆಂಪು ಸ್ವೆಟರನ್ನು ಅವಚಿಕೊಂಡು ,ನೀಲಿಕೋಡೆಯನ್ನು ಗಾಳಿಯ ತೊಲಲಾಟದಲ್ಲಿ ಅಲಗಾಡಿಸುತ್ತ ಮೇತ್ತನೆ ಹೆಜ್ಜೆಯನ್ನು ಇಡುತ್ತ ಅವಳು ಬಂದಳು.

ಅವಳ ಎದುರಿಗೆ ಮುಗಿಲ ನೋಡುತ್ತ ನಿಂತೆ.
ಅವಳ ಕಣ್ಣಲ್ಲಿ ಆಶ್ಚರ್ಯ,ದುಗುಡ ,ಆತಂಕ

"ಅರಾಮ ಅದಿ'
'
ಹೆಂಗೋ ಅದಿನಿ'

ನೀನ್ಯಾಕೆ ಇಲ್ಲಿಗೆ ಬಂದಿ
       ಮಾತು ಬರಲಿಲ್ಲ ,ಕಣ್ಣು ತಂಪಾದವು.
'ಸ್ವಾರ್ಥಿಯಾಗಬೇಡ'
                 ಅವಳು ಮೌನವಾಗಿ ಮುಂದೆಹೊದಳು.
ಅವಳ ಕಂಕುಳಲ್ಲಿ ಕುಳಿತ ಮಗು ನನ್ನನ್ನೆ ದಿಟ್ಟಿಸುತಿತ್ತು.

ಹೋಗಿ ಎತ್ತಿಕೊಳ್ಳಲೇ ?

ಬೇಡ ನಾವೀಗ ಅಪರಿಚಿತರು.


No comments:

Post a Comment